Rafi Inspires

Rafi Inspires

Share

14/02/2023

ಪ್ರೀತಿಸುವುದಾದರೆ ವ್ಯರ್ಥವಾಗದ ಪ್ರೀತಿಯಾಗಿರಲಿ..
ಪ್ರೀತಿ ಸತ್ಯವಾಗಿದ್ದರೆ, ಮರಳಿ ಪಡೆಯಬಹುದಾದ ಪ್ರೀತಿಯಾಗಿರಲೀ.
ಪ್ರೀತಿಸುವುದಾದರೆ ಪ್ರತಿಕ್ಷಣದ ಪ್ರೀತಿಯಾಗಿರಲಿ.

07/02/2023

ತುರ್ಕಿಯಲ್ಲಿ 5000ಸಾವಿರದಷ್ಟು ಜನರು ಭೀಕರ ಭೂಕಂಪದಲ್ಲಿ ಮರಣಹೊಂದಿದ್ದಾರೆ. ಈ ನಡುವೆ ತಂದೆಯೊಬ್ಬರು ತನ್ನ ಮಗುವಿಗೆ ಕೊನೆಯ ಉಚ್ಚಾರವಾಗಿ ಹೇಳಿ ಕೊಡುವ ಕಲಿಮತ್ತೌಹೀದ್ ವಿಶ್ವಾಸಿಗಳ ಹೃದಯ ಸ್ಥಂಭನವನ್ನೇ ಅನುಕಿಸುವಂತಿದೆ.

ಖುರ್ ಆನ್ ಈ ರೀತಿ ಭೂಮಿ ಪೂರ್ಣವಾಗಿ ನಡುಗಿಸುವ ದಿನವೊಂದನ್ನು ಈ ರೀತಿ ನೆನಪಿಸುತ್ತದೆ.

ಅಧ್ಯಾಯ: 56 ಶ್ಲೋಕ: 1
إِذَا وَقَعَتِ ٱلْوَاقِعَةُ

ಆ ಘಟನೆ (ಅಂತ್ಯ ದಿನ) ಸಂಭವಿಸಿದಾಗ.

ಅಧ್ಯಾಯ: 56 ಶ್ಲೋಕ: 2
لَيْسَ لِوَقْعَتِهَا كَاذِبَةٌ

ಅದರ ಸಂಭಾವ್ಯತೆಯನ್ನು ಸುಳ್ಳಾಗಿಸುವ ಯಾವನೂ ಇರಲಾರನು.

ಅಧ್ಯಾಯ: 56 ಶ್ಲೋಕ: 3
خَافِضَةٌۭ رَّافِعَةٌ

ಪತನ, ಉಚ್ಛ್ರಾಯದ ಘಟನೆ ¹.

ಅಧ್ಯಾಯ: 56 ಶ್ಲೋಕ: 4
إِذَا رُجَّتِ ٱلْأَرْضُ رَجًّۭا

ಅಂದರೆ ಭೂಮಿ ಬಲವಾಗಿ ನಡುಗಿಸಲ್ಪಟ್ಟಾಗ.

ಅಧ್ಯಾಯ: 56 ಶ್ಲೋಕ: 5
وَبُسَّتِ ٱلْجِبَالُ بَسًّۭا

ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ.

ಅಧ್ಯಾಯ: 56 ಶ್ಲೋಕ: 6
فَكَانَتْ هَبَآءًۭ مُّنۢبَثًّۭا

ಹಾಗೆ ಅವು ಚದುರಿ ಹರಡಿದ ಧೂಳೀಪಟ ಗಳಾಗುವುವು.

ಅಧ್ಯಾಯ: 56 ಶ್ಲೋಕ: 7
وَكُنتُمْ أَزْوَٰجًۭا ثَلَٰثَةًۭ

ಆಗ ನೀವು ಮೂರು ಗುಂಪುಗಳಾಗಿ ವಿಂಗಡಿಸಲ್ಪಡುವಿರಿ.

ಅಧ್ಯಾಯ: 56 ಶ್ಲೋಕ: 8
فَأَصْحَٰبُ ٱلْمَيْمَنَةِ مَآ أَصْحَٰبُ ٱلْمَيْمَنَةِ

ಆಗ ಒಂದು ವಿಭಾಗ ಬಲ ವಿಭಾಗದವರು! ಬಲ ವಿಭಾಗದವರದ್ದು ಏನವಸ್ಥೆ !

ಅಧ್ಯಾಯ: 56 ಶ್ಲೋಕ: 9
وَأَصْحَٰبُ ٱلْمَشْـَٔمَةِ مَآ أَصْحَٰبُ ٱلْمَشْـَٔمَةِ

ಎಡ ವಿಭಾಗದವರು! ಎಡ ವಿಭಾಗದವರ ಪರಿಸ್ಥಿತಿಯೇನು?

ಅಧ್ಯಾಯ: 56 ಶ್ಲೋಕ: 10
وَٱلسَّٰبِقُونَ ٱلسَّٰبِقُونَ

(ಸತ್ಯವಿಶ್ವಾಸ ಹಾಗೂ ಸತ್ಕರ್ಮದಲ್ಲಿ) ಮುನ್ನಡೆ ಸಾಧಿಸಿದವರು (ಪರಲೋಕದಲ್ಲೂ) ಮುನ್ನಡೆದವರು.

ಅಧ್ಯಾಯ: 56 ಶ್ಲೋಕ: 11
أُو۟لَٰٓئِكَ ٱلْمُقَرَّبُونَ

ಅವರು ಅಲ್ಲಾಹನ ಸಾಮೀಪ್ಯ ಪಡೆದವರಾಗಿರುವರು.

ಅಧ್ಯಾಯ: 56 ಶ್ಲೋಕ: 12
فِى جَنَّٰتِ ٱلنَّعِيمِ

ಸಂಪತ್ಸಮೃದ್ಧ ಸ್ವರ್ಗೋದ್ಯಾನಗಳಲ್ಲಿ (ಅವರು ವಾಸಿಸುವರು.)

ವಿವರಣೆ:

Get App https://qurankannada.page.link/app

ಈ ರೀತಿ ಖುರ್ ಆನ್ ಎಚ್ಚರಿಸುತ್ತಲೇ ಇರುವ ಆಯತ್ ಗಳು ಮುಂದುವರಿಯುತ್ತದೆ.

ಅಲ್ಲಾಹನ ಸಾಮಿಪ್ಯ ಮತ್ತು ವಿಜಯಿ ಗಳ ಸಾಲಿನಲ್ಲಿ ಸೇರಲಿಚ್ಚಿಸುವ ನಾವು ಸಂಕಷ್ಟಗಳು ಒಂದೊಂದಾಗಿ ಎರಗುವಾಗ ಮಗುವಿನ ತಂದೆಯಷ್ಟಾದರೂ ಈಮಾನ್ ,ವಿಶ್ವಾಸ ಭದ್ರಪಡಿಸಬೇಕಿದೆ.

https://chat.whatsapp.com/FMUJIUGYjxjK3zuvLvBjtI

Photos from Rafi Inspires's post 28/01/2023

ಅವರಿಗಿನ್ನೆಲ್ಲಿ ವಿಶ್ರಾಂತಿ...

ಎಸ್ ಎಸ್ ಎಫ್ ಕೇರಳ ರಾಜ್ಯ ಪ್ರತಿನಿಧಿಗಳ ಸಂಗಮವಾಗಿದೆ ಈ ದೃಶ್ಯಗಳು...(28/01/2023)

ರೋಗವು ಸಾಮಾನ್ಯವಾಗಿ ವಿಶ್ರಾಂತಿಗೆ ಕೊಂಡೊಯ್ಯಬಹುದು, ಆದರೆ ದೊಡ್ಡ ಕನಸುಗಳು ಹೊತ್ತು ಸಮುದಾಯದ ನಿರೀಕ್ಷೆ ಹೊತ್ತಿರುವ ಸುಲ್ತಾನುಲ್ ಉಲಮಾರ ಮುಂದೆ ರೋಗವು ಸೋಲಪ್ಪಿಕೊಳ್ಳಲೇಬೇಕು....

إِنَّمَا الْأَعْمَالُ بِالنِّيَّاتِ

ಗುರಿಯ ಮುಂದೆ ,ನಿರ್ಧಾರ ಅಚಲವಾಗಿ ದ್ದರೆ ಅಲ್ಲಾಹನು ಅನುಗ್ರಹಿಸುವನು.

ಅಲ್ ಹಮ್ದುಲಿಲ್ಲಾಹ್.

ಶೈಖುನಾ ರಿಗೆ ಪೂರ್ಣ ಆಫಿಯತ್ ಮತ್ತು ದೀರ್ಘಾಯುಷ್ಯ ನೀಡಿ ಅನುಗ್ರಹಿಸು ಅಲ್ಲಾಹ್ ಆಮೀನ್

https://chat.whatsapp.com/FMUJIUGYjxjK3zuvLvBjtI

Want your public figure to be the top-listed Public Figure in Pune?
Click here to claim your Sponsored Listing.

Category

Telephone

Website

Address


Pune